ನಕ್ಕುಬಿಡು

ನಕ್ಕು ಬಿಡು ಗೆಳತಿ
ಅಂಜದಿರು ಅಳುಕದಿರು
ನಿರಾಶೆಯಲಿ ಧೃತಿಗೆಡದಿರು
ಕಂಗೆಡದಿರು, ಕಷ್ಟಗಳೆದುರು.
ಜೀವನವಲ್ಲ ಹೂವಿನ ಹಾಸಿಗೆ
ನೋವು ನಲಿವುಗಳ ಒಸಗೆ
ತಾಳಿದವನು ಬಾಳಿಯಾನು
ಮನನವಾಗಲಿ ಮುತ್ತಿನಂತಹ ಮಾತು.
ತಾಳು ತಾಳು ಧೈರ್‍ಯ ತಾಳು
ಧೈರ್‍ಯವೇ ಸಂಜೀವಿನಿ ಕೇಳು
ತಾಳುವಿಕೆಯ ತಪದ ಫಲ
ಸಿಕ್ಕೀತು ಬಿಡದಿರು ಛಲ.
ಇದ್ದೀತು ಹಾದಿಯಲ್ಲಿ ಕಲ್ಲು ಮುಳ್ಳು
ಅಂಜಿಕೆ ಆತಂಕವ ದೂರ ತಳ್ಳು
ಇರುಳ ಹಿಂದೆಯೇ ಹಗಲು
ಬಂದಾಗ ಸಂತಸದ ಹೊನಲು.
ಗೆಳತಿ, ಚಿಂತೆಬಿಡು, ನಕ್ಕುಬಿಡು
ನಿನ್ನ ನಗುವಲ್ಲಿ ಕೊಚ್ಚಿ ಹೋಗಲಿ
ದುಃಖ ದುಮ್ಮಾನದ ದುಗುಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ನೀರಿನಂಥ ಮನಸ್ಸು
Next post ಹಸಿರು ಮರಗಳು ತೇರು ಎಳೆದಿವೆ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys